ಯಶೋಗಾಥೆ
ನಮ್ಮ ಶಾಲೆಯ ಮೊದಲ ಹೆಜ್ಜೆಯ ಪ್ರಗತಿಯನ್ನು ಪದಗಳಲ್ಲಿ ಮೂಡುವಂತೆ ಪ್ರೇರೇಪಣೆ ನೀಡಿದ, ಸಹಕರಿಸಿದ,ಮಾರ್ಗದರ್ಶನ ನೀಡಿದಂತಹ ನಮ್ಮ ಡಯಟ್ ನ ಪ್ರಾಂಶುಪಾಲರಾದ ಶ್ರೀಮತಿ ಪುಷ್ಪಲತಾ ಮೇಡಂ ರವರಿಗೆ ಹಾಗೂ ಶ್ರೀಯುತ ಫಣೀಶ್ ಸರ್ ,ಉಪಪ್ರಾಂಶುಪಾಲರಿಗೂ ಈ ಮೂಲಕ ನುಡಿ ನಮನಗಳನ್ನು ಸಲ್ಲಿಸುತ್ತೇನೆ. ಹಾಸನ ಜಿಲ್ಲೆಯ,ಅರಸೀಕೆರೆ ತಾಲೂಕಿನ, ಬಾಗೇಶಪುರ ಕ್ಲಸ್ಟರ್ ನ ಬಸ್ ಸಂಚಾರದಿಂದ ವಂಚಿತವಾದ ಒಂದು ಪುಟ್ಟ ಹಳ್ಳಿಯ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಪ್ಪೇನಹಳ್ಳಿ. 2019ನೇ ಸಾಲು ನಮ್ಮ ದೇಶಕ್ಕೆ covid-19 ಪಿಡುಗಿನ ಕಾಲ ನಮ್ಮ ಶಾಲೆಗೆ ಧನಾತ್ಮಾಕ ಬದಲಾವಣೆಯ ಪರ್ವ ಕಾಲ. ನಮ್ಮ ಶಾಲೆ ಯಲ್ಲಿ 1ರಿಂದ 7ನೇ ತರಗತಿಯ ವರೆಗೆ 31 ಮಕ್ಕಳು ಅಭ್ಯಸಿಸುತ್ತಿದ್ದಾರೆ.ನಮ್ಮದು ಚಿಕ್ಕ ಹಿರಿಯ ಪ್ರಾಥಮಿಕ ಶಾಲೆ ಅಂದರೆ ಕೇವಲ ಮೂರು ಕೊಠಡಿಗಳನ್ನು ಒಳಗೊಂಡಿದೆ.ಆಟದ ಮೈದಾನವಿಲ್ಲ,ಮಕ್ಕಳು ಪ್ರಾರ್ಥನೆಗೆ ನಿಲ್ಲಲು ಸಮರ್ಪಕ ಸ್ಥಳಾವಕಾಶವಿಲ್ಲ,ಕೊಠಡಿಗಳು ಸುಸ್ಥಿತಿಯಲಿಲ್ಲ, ಪಿಠೋಪಕರಣಗಳ ಅಲಭ್ಯತೆಯೂ,ಗೈರುಹಾಜರಿಯೂ ಕಾಡುತ್ತಿತ್ತು. ಇವುಗಳನ್ನೆಲ್ಲಾ ಮೀರಿ ಶಾಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಬೇಕೆಂಬ ಮಳೆ ಮೋಡಗಳು ರೂಪಗೊಂಡವು.Dreams transform into thoughts and thoughts results in action.ಆದ್ರೆ ನಮ್ಮ ಕ್ರಿಯಾ ಯೋಜನೆ ಬಹುವಾರ್ಷಿಕದಾಗಿದ್ದವು.ಆದರೆ ಅದರತ್ತ ಸಾಗಲು ಚಿಕ್ಕ ಚಿಕ್ಕ ಹೆಜ್ಜೆಯ ಅವಶ್ಯಕತೆ ಇದೆ